`ನೆರಳು` ಆಗಸ್ಟ್ 9ಕ್ಕೆ
Posted date: 22 Mon, Jul 2013 – 08:25:10 AM

ಈ ಹಿಂದೆ ತಿಳಿಸಲಾಗಿದ್ದ ವಿಚಾರ ‘ನೆರಳು’ ಚಿತ್ರವೂ ಇದೆ ತಿಂಗಳ 26ರಂದು ಬಿಡುಗಡೆ ಆಗುವುದು ಎಂದು ಎರಡು ವಾರ ಮುಂದೆ ಹೋಗಿದೆ. ಅಂದರೆ ಆಗಸ್ಟ್ 9 ರಂದು ‘ನೆರಳು’ ಬಿಡುಗಡೆ ಆಗಲಿದೆ. ಸಧ್ಯದ ಇನ್ನೊಂದು ವಿಚಾರ ಅಂದರೆ ಈ ಚಿತ್ರದ ತುಣುಕುಗಳು ಯು ಟ್ಯೂಬು ಅಲ್ಲಿ ಹೆಚ್ಚು ನೋಡುಗರನ್ನು ಸೃಷ್ಟಿಸಿಕೊಂಡಿದೆ.

ಚಿತ್ರದ ನಿರ್ದೇಶಕ ವಿನೋದ್ ಕೆ ಅವರ  ಇಹ ಲೋಕ ನಿರ್ಗಮನ ನಂತರ ‘ನೆರಳು’ ತೆರೆಮೇಲೆ ರಾರಾಜಿಸಲಿದೆ. ನಿರ್ಮಾಪಕ ಅತುಲ್ ಕುಲಕರ್ಣಿ ಅವರ ಪ್ರಥಮ ಕಾಣಿಕೆ ‘ನೆರಳು’ ಚಿತ್ರ ವಿನೋದ್ ಕೆ. ಅವರ ಪ್ರಥಮ ನಿರ್ದೇಶನದ ಚಿತ್ರ ಮನರಂಜನೆ ಜೊತೆಗೆ ಮನಕ್ಕೆ ಒಪ್ಪುವ ವಿಚಾರವನ್ನು ಸಹ ಪ್ರೇಕ್ಷಕನ ಮುಂದೆ ಇಡಲಿದೆ.
ತಪ್ಪು ಮಾಡದವರು ಯಾರವ್ರೆ... ಆ ತಪ್ಪು ಸರಿಪಡಿಸಿಕೊಂಡು ಹೋಗುವುದೇ ಜೀವನ. ಆದರೆ ಕೆಲವರು ತಪ್ಪು ಮಾಡುತ್ತಲೆ ಇರುತ್ತಾರೆ. ಅಂತಹವರಿಗೆ ಪಾಪ ಪ್ರಜ್ಞೆ ನೆರಳಿನಂತೆ ಕಾಡುತ್ತಲೆ ಇರುವುದು. ಇಂತಹ ವಿಚಾರವನ್ನು ಇಟ್ಟುಕೊಂಡು ಬೆಳಗಾವಿಯಲ್ಲಿ ‘ಜೈ ಕರ್ನಾಟಕ’ ಪತ್ರಿಕೆಯ ಮಾಧ್ಯಮ ಮಿತ್ರರು ಕೆಲವು ಟಿ.ವಿ ಸೀರಿಯಲ್ಗಳಿಗೆ – ಕಪ್ಪು ತೆರೆ, ಕುಂಕುಮ ಭಾಗ್ಯ, ತೇಲಿಹೋದ ನೌಕೆ ಧಾರವಾಹಿಗಳಿಗೆ ಕೆಲಸ ಮಾಡಿದ ಅನುಭವ ಇಂದ ದೊಡ್ಡ ಪರದೆಯ ಚಿತ್ರ ನಿರ್ದೇಶಿಸಿದ್ದಾರೆ.
ನಿರ್ಮಾಪಕ ಅತುಲ್ ಕುಲಕರ್ಣಿ ಅವರು ಇದೊಂದು ತ್ರಿಲ್ ನೀಡುವ ಜೊತೆ ಮನೆಮಂದಿಗೆ ಇಷ್ಟ ಆಗುವ ಸಿನೆಮಾ ಅಂತಾರೆ. ಅವರು ಮಹಾರಾಷ್ಟ್ರ ಮೆಟೀರಿಯಲ್ ಟೆಸ್ಟಿಂಗ್ ಕಾರ್ಖಾನೆ ಒಡೆಯ.

ಪಾತ್ರವರ್ಗದಲ್ಲಿ ಸಂಜೀವ್, ಆಕಾಶ್, ಶಶಿಕುಮಾರ್,ಹಿರಿಯ ನಟ ಅವಿನಾಷ್ ಹಾಗೂ ಸುಧಾ ಬೆಳವಾಡಿ ಜೋಡಿ ಈ ಚಿತ್ರದಲ್ಲಿದೆ, ಹೊನ್ನಾವಳ್ಳಿ ಕೃಷ್ಣ, ಶಂಕರ್ ಅಶ್ವಥ್ ಇದ್ದಾರೆ.ಶಿವರಾಜ್ ಮೇಹು ಅವರ ಸಂಕಲನ, ಶಂಕರ್ ಅವರ ಛಾಯಾಗ್ರಹಣ, ಶ್ರೀ ಹರ್ಷ ಅವರ ಸಂಗೀತ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed